ವರದಕ್ಷಿಣೆಯಾಗಿ ಬಿಎಂಡಬ್ಲ್ಯೂ ಕಾರು ಕೊಡಲಿಲ್ಲ ಎನ್ನುವ ಕಾರಣಕ್ಕೆ ನಿಂತ ಮದುವೆ : ವೈದ್ಯೆ ಆತ್ಮಹತ್ಯೆ

ಕೇರಳ : ತಿರುವನಂತಪುರಂ ಮೆಡಿಕಲ್ ಕಾಲೇಜಿನ ಪಿಜಿ ಡಾಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

ಆರೋಗ್ಯ ಸಚಿವೆ ವೀಣಾ ಜಾರ್ಜ್, ಪ್ರಕರಣವನ್ನು ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗಕ್ಕೆ ನಿರ್ದೇಶನ ನೀಡಿದ್ದಾರೆ.

26 ವರ್ಷದ ವೈದ್ಯೆ ಶಹನಾ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸರ್ಜರಿ ವಿಭಾಗದಲ್ಲಿ ಶಹನಾ ಪಿಜಿ ವಿದ್ಯಾರ್ಥಿನಿಯಾಗಿದ್ದಳು. ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರು, ನಿನ್ನೆ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಅದೇ ಆಸ್ಪತ್ರೆಯ ಡಾಕ್ಟರ್ ಒಬ್ಬರನ್ನು ಇವರು ಪ್ರೀತಿಸುತ್ತಿದ್ದಳು. ಆದರೆ ಅವರು ಇತ್ತೀಚೆಗೆ ಮದುವೆ ಆಗಲ್ಲ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಶಹನಾ ಸಂಬಂಧಿಕರು ಆರೋಪಿಸಿದ್ದಾರೆ.

ಏನಿದು ಆರೋಪ..?

ಶಹನಾಗೆ ಅದೇ ಆಸ್ಪತ್ರೆಯ ಸ್ನೇಹಿತ, ವೈದ್ಯನ ಜೊತೆ ಮದುವೆ ಮಾತುಕತೆ ನಡೆದಿತ್ತು. ಶಹನಾಳನ್ನು ಮದುವೆ ಆಗಬೇಕು ಅಂದರೆ ಬಂಗಾರ, ಭೂಮಿ, ಬಿಎಂಡಬ್ಲ್ಯೂ ಕಾರ್ ನೀಡಬೇಕು ಎಂದು ಆತ ಡಿಮ್ಯಾಂಡ್ ಮಾಡಿದ್ದ. ಆದರೆ ಶಹನಾ ಕುಟುಂಬಕ್ಕೆ ಅಷ್ಟಲ್ಲ ನೀಡಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಆತ ಶಹನಾ ಅವರನ್ನು ಮದುವೆ ಆಗಲ್ಲ ಎಂದಿದ್ದ. ಇದರಿಂದ ನನ್ನ ಮಗಳು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.

Baravanige News

Translate »

You cannot copy content from Baravanige News

Scroll to Top