Sunday, September 8, 2024
Homeಸುದ್ದಿಪಾಳು ಬಿದ್ದ ಮನೆಯಲ್ಲಿ 5 ಅಸ್ಥಿ ಪಂಜರಗಳು: ಆತ್ಮಹತ್ಯೆಯಾ..!? ಕೊಲೆಯಾ..!?

ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿ ಪಂಜರಗಳು: ಆತ್ಮಹತ್ಯೆಯಾ..!? ಕೊಲೆಯಾ..!?

ಚಿತ್ರದುರ್ಗ, ಡಿ.29: ಕೋಟೆನಾಡಿನ ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿರುವುದು 3 ಅಸ್ಥಿಪಂಜರಗಳಲ್ಲ ಒಟ್ಟು 5 ಅಸ್ತಿಪಂಜರ ಎಂಬ ರೋಚಕ ಮಾಹಿತಿ ಬಹಿರಂಗವಾಗಿದೆ. ಪತ್ತೆಯಾದ 5 ಅಸ್ತಿಪಂಜರಗಳು ಚಳ್ಳಕೆರೆ ಗೇಟ್ ಬಳಿ ವಾಸವಿದ್ದ ಜಗನ್ನಾಥ್ ರೆಡ್ಡಿ ಕುಟುಂಬದವರೇ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಪಾಳು ಬಿದ್ದ ಮನೆಯಲ್ಲಿ ಮೃತರನ್ನು ಜಗನ್ನಾಥ್​ ರೆಡ್ಡಿ, ಪತ್ನಿ ಪ್ರೇಮಾ ರೆಡ್ಡಿ, ಮಕ್ಕಳಾದ ತ್ರಿವೇಣಿ ರೆಡ್ಡಿ, ನರೇಂದ್ರ ರೆಡ್ಡಿ, ಕೃಷ್ಣಾ ರೆಡ್ಡಿ ಎಂದು ಅಂದಾಜಿಸಲಾಗಿದೆ.

ಮೊದಲ ಬಾರಿಗೆ ಒಂದು ಬೆಡ್ ರೂಮ್​ನಲ್ಲಿ ಮೂರು ಅಸ್ಥಿಪಂಜರಗಳು ಪತ್ತೆ ಆಗಿದ್ದವು. ಕೆಲ ಸಮಯದ ನಂತರ ಮತ್ತೊಂದರಲ್ಲಿ 2 ಅಸ್ಥಿಪಂಜರ ಪತ್ತೆಯಾಗಿವೆ. ಜಗನ್ನಾಥ್ ರೆಡ್ಡಿಯವರು ದೊಡ್ಡ ಸಿದ್ದವ್ವನಹಳ್ಳಿ ಮೂಲದವರಾಗಿದ್ದು ಮನೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಇವರ ಕುಟುಂಬದ್ದೇ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸದ್ಯ ವಿಧಿ ವಿಜ್ಞಾನ ತಜ್ಞರು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಜಗನ್ನಾಥ್​ ರೆಡ್ಡಿ ಹಾಗೂ ಪತ್ನಿ ಪ್ರೇಮಾ ಅವರಿಗೆ ಮೂವರು ಗಂಡು ಮಕ್ಕಳಿದ್ದು, ಓರ್ವ ಮಗಳಿದ್ದಳು. ಒಟ್ಟು 6 ಮಂದಿ ಕುಟುಂಬದಲ್ಲಿದ್ದರು. ಇವರ ಹಿರಿಯ ಮಗ ಡಾ.ಮಂಜುನಾಥ್ ರೆಡ್ಡಿ ಈ ಹಿಂದೆಯೇ ಮೃತಪಟ್ಟಿದ್ದನು. 2ನೇ ಮಗ ಕೃಷ್ಣಾ ರೆಡ್ಡಿ, ಮಗಳು ತ್ರಿವೇಣಿ ರೆಡ್ಡಿ ಹಾಗೂ 4ನೇ ಮಗ ನರೇಂದ್ರ ರೆಡ್ಡಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ಕೊನೆ ಮಗನ ವಿರುದ್ಧ ಸಾಕಷ್ಟು ವಂಚನೆ ಆರೋಪ ಕೇಳಿ ಬಂದಿದ್ದವು. ಮಗನ ಕೃತ್ಯಕ್ಕೆ ಬೇಸತ್ತು ಕುಟುಂಬವು ಸಮಾಜದಿಂದ ದೂರ ಉಳಿದಿತ್ತು. ಇಂತಹ ಆರೋಪಗಳು ಹಿನ್ನೆಲೆಯಲ್ಲಿ ಕುಟುಂಬ ಸಮೇತ ತುಮಕೂರಿಂದ ಚಿತ್ರದುರ್ಗಕ್ಕೆ ಬಂದಿದ್ದರು

ಮನೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಬಗ್ಗೆ ಜಗನಾಥ್​ ಸಂಬಂಧಿಯಾದ ಪವನ್ ಕುಮಾರ್ ಎಂಬುವರಿಂದ ಬಡಾವಣೆ ಠಾಣೆಗೆ ದೂರು ನೀಡಿದ್ದರು. ಸಂಬಂಧಿ ಜಗನ್ನಾಥ್​ ರೆಡ್ಡಿ ಮತ್ತು ಕುಟುಂಬ ವಾಸವಾಗಿದ್ದರು. 3 ವರ್ಷದ ಹಿಂದೆಯೇ ಮನೆಯಲ್ಲಿ ಮೃತಪಟ್ಟಿರಬಹುದು. ಮೃತರ ಸಾವಿನ ಬಗ್ಗೆ ಅನುಮಾನ ಇದೆ ಎಂದು ಅವರು ಪ್ರಕರಣ ದಾಖಲು ಮಾಡಿದ್ದಾರೆ.

ಪತ್ತೆಯಾದ ಅಸ್ಥಿಪಂಜರದ ಸುತ್ತ ಹಲವು ಅನುಮಾನಗಳಿವೆ. ಸುಮಾರು ವರ್ಷಗಳಿಂದ ಜಗನ್ನಾಥ್​ ರೆಡ್ಡಿ ಕುಟುಂಬ ಯಾರ ಸಂಪರ್ಕದಲ್ಲಿ ಇಲ್ಲ. ನಮ್ಮ ಮನೆಗೆ ಅವರು ಬರ್ತಿರಲಿಲ್ಲ, ಅವರ ಮನೆಗೆ ನಾವು ಹೋಗ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥ್​ ರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಮನೆಯಲ್ಲಿ ಪತ್ತೆ ಆಗಿರುವುದು ಅವರವೇ ಅಸ್ಥಿಪಂಜರ ಆಗಿರಬಹುದು. 3 ವರ್ಷದ ಹಿಂದೆ ಅವರು ಮನೆಯಲ್ಲಿ ಮೃತಪಟ್ಟಿರಬಹುದು. ಮೃತರ ಸಾವಿನ ಬಗ್ಗೆ ಪವನ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ​

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News