ಲಯನ್ಸ್ ಕ್ಲಬ್ ಬಂಟಕಲ್ಲು ಬಿ ಸಿ ರೋಡ್ ವತಿಯಿಂದ ಸಕ್ಕರೆ ಖಾಯಿಲೆಯ ವಿಶೇಷ ಅರಿವು ಕಾರ್ಯಕ್ರಮ

Dist.317C, Region3, Zone3 ನ ಲಯನ್ಸ್ ಕ್ಲಬ್ ಬಂಟಕಲ್ಲು ಬಿ ಸಿ ರೋಡ್ ನ ಸದಸ್ಯರು ಇಂದು ವಿಶೇಷ ರೀತಿಯಲ್ಲಿ ಡಯಾಬೆಟಿಕ್ (ಸಕ್ಕರೆ ಖಾಯಿಲೆ) ಅರಿವು ಮೂಡಿಸುವಿಕೆಯ ಕಾರ್ಯಕ್ರಮವನ್ನು ಬಂಟಕಲ್ಲು ಪೇಟೆಯಲ್ಲಿ ನೆರವೇರಿಸಿದರು.

ರಸ್ತೆಯಲ್ಲಿ ಹಾದುಹೋಗುವ ಎಲ್ಲ ನಾಗರಿಕರಿಗೆ ಹಾಗೂ ಬಸ್ಸು ಗಳನ್ನು ನಿಲ್ಲಿಸಿ, ಬಸ್ಸಿನ ಒಳಗೆ ಇರುವ ಎಲ್ಲಾ ಪ್ರಯಾಣಿಕರಿಗೆ ಈ ಖಾಯಿಲೆಯ ಬಗ್ಗೆ ಅರಿವು ಮೂಡಿಸಲಾಯಿತು. ಸಂಸ್ಥೆಯ ಮಾಜಿ ಆದ್ಯಕ್ಷರಾದ ಲ. ವಿಜಯ್ ಧೀರಜ್ ಅವರು ಡಯಾಬಿಟಿಸ್ , ಸಕ್ಕರೆ ಕಾಯಿಲೆ, ಮದುಮೇಹ ಎಂಬ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಈ ಕಾಯಿಲೆ ಈಗ ಸಾಮಾನ್ಯವಾದ ರೋಗ ಲಕ್ಷಣವಾಗಿಬಿಟ್ಟಿದೆ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹೆಚ್ಚಿಸಿ ಅನೇಕ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಹಾಗೂ ಇದನ್ನು ಯಾವ ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ತರಬಹುದು ಎಂದು ಪ್ರಯಾಣಿಕರಿಗೆ ಅರಿವು ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಬಂಟಕಲ್ಲು ಬಿ ಸಿ ರೋಡ್ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ.ಜೋಸಿಲ್ ನೊರೊಹ್ನ ಇವರು ಎಲ್ಲಾ ಪ್ರಯಾಣಿಕರಿಗೆ ಶುಭಹಾರೈಸಿದರು ಹಾಗೂ ಕೋಶಾಧಿಕಾರಿ ಲ. ಸದಾನಂದ ಪೂಜಾರಿ ಇವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಬಂಟಕಲ್ಲು ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರ ಜೊತೆ, ಪಾಂಬೂರಿನ ಯುವಕರೂ ಕೂಡ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು. ಸ್ಥಳೀಯ ನಾಗರಿಕರು, ರಿಕ್ಷಾ ಚಾಲಕರು, ಎಲ್ಲಾ ಅಂಗಡಿ ಮಾಲೀಕರು, ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಈ ಕಾರ್ಯಕ್ರಮದ ಅರಿವನ್ನು ಪಡೆದುಕೊಂಡರು.

Baravanige News

Translate »

You cannot copy content from Baravanige News

Scroll to Top