ಶಿರ್ವ : ಗಾಂಜಾ ಮಾರಾಟ : ವ್ಯಕ್ತಿಯ ಸೆರೆ

ಶಿರ್ವ : ಪೊಲೀಸ್‌ ಠಾಣಾ ವ್ಯಾಪ್ತಿಯ ಕುರ್ಕಾಲು ಕುಂಜಾರುಗಿರಿ ಬಳಿಯ ಬಾಣತೀರ್ಥ ಕ್ರಾಸ್‌ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸುಭಾಷ್‌ ನಗರ ನಿವಾಸಿ ರೇವುನಾಥ ಆಲಿಯಾಸ್‌ ಪ್ರೇಮನಾಥ ಆಲಿಯಾಸ್‌ ರೇವ್‌(23) ನನ್ನು  ಶಿರ್ವ ಪೊಲೀಸ್‌ ಠಾಣಾಧಿಕಾರಿ ಸಕ್ತಿವೇಲು ಇ. ನೇತೃತ್ವದ ಪೊಲೀಸರು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ.

ಆತನಿಂದ ಸುಮಾರು 49,200 ರೂ. ಮೌಲ್ಯದ ಗಾಂಜಾ ಮತ್ತು ನಗದು 1,500 ರೂ, ಹಾಗೂ ಸ್ಕೂಟರ್‌ ಅನ್ನು ವಶಪಡಿಸಿಕೊಂಡಿದ್ದಾರೆ.

You cannot copy content from Baravanige News

Scroll to Top