ವಿದ್ಯುತ್ ಸ್ಫರ್ಶ: ಬಿಜೆಪಿ ಮುಖಂಡನ ಸಾವು!

ಬೈಂದೂರು: ತಮ್ಮ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಸ್ಪರ್ಶವಾಗಿ ಸ್ಥಳೀಯ ಬಿಜೆಪಿ ಮುಖಂಡ ನಿಧನರಾದ ಘಟನೆ ಇಂದು ಸಂಭವಿಸಿದೆ. ಸತೀಶ ಸುಬ್ರಾಯ ಪ್ರಭು (52) ಮೃತ ದುರ್ದೈವಿಯಾಗಿದ್ದಾರೆ.

ಇವರು ಶಿರೂರಿನ ತಮ್ಮ ತೋಟದಲ್ಲಿ ಕೆಲಸ ಮಾಡುವಾಗ ಹತ್ತಿದ್ದ, ಏಣಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಕರೆಂಟ್ ಶಾಕ್‌ನಿಂದ ಸಾವನ್ನಪ್ಪಿದ್ದಾರೆ. ಹಲವು ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯಲ್ಲಿ ಸೇವೆ ಸಲ್ಲಿಸಿದ್ದ ಸತೀಶ್ ಪ್ರಭು ಅವರ ನಿಧನವು ಅಭಿಮಾನಿಗಳಿಗೆ ಆಘಾತ ತಂದಿದೆ.

ಘಟನಾ ಸ್ಥಳಕ್ಕೆ ಬೈಂದೂರು ಕ್ರೈಂ ಪಿ.ಎಸ್.ಐ ಮಹೇಶ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ, ಪರಿಶೀಲಿಸಿದರು. ಇನ್ನು ಬೈಂದೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.

You cannot copy content from Baravanige News

Scroll to Top