ಕುಸಿದು ಬಿದ್ದು ಯುವಕನ ಮೃತ್ಯು!

ಕುಂದಾಪುರ : ಮೊಬೈಲ್ ನಲ್ಲಿ ಲೂಡ ಆಟವಾಡುತ್ತಿದ್ದಾಗ
ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಯರಾಮ (30) ಮೃತಪಟ್ಟವರು. ಇವರು ಅ.16 ರಂದು ರಾತ್ರಿ ವೇಳೆ ಮೊಬೈಲ್ ನಲ್ಲಿ ಲೂಡ ಆಡುತ್ತಾ ಕುಳಿತುಕೊಂಡಿದ್ದವರು ಒಮ್ಮೆಲೆ ಕುಸಿದು ಬಿದ್ದಿದ್ದರು.

ತಕ್ಷಣ ಅವರನ್ನು ಶಂಕರನಾರಾಯಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top