ಕುಂದಾಪುರ: ಬೃಹತ್ ಗಾತ್ರದ ಮರ ಬಿದ್ದು ವಿದ್ಯುತ್ ಕಂಬಗಳು ಜಖಂ; ತಪ್ಪಿದ ಭಾರೀ ಅನಾಹುತ

ಕುಂದಾಪುರ, ಜು.13: ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಜಖಂ ಆದ ಘಟನೆ ಕುಂದಾಪುರ ಸಮೀಪ ಹೆಮ್ಮಾಡಿಯ ಸಂತೋಷನಗರದ ರಸ್ತೆಯಲ್ಲಿ ಸಂಭವಿಸಿದೆ.

ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಬೃಹತ್ ಮರವು ರಸ್ತೆಯ ಮೇಲೆ ಉರುಳಿದ ಪರಿಣಾಮ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ.

ಮರ ಧರೆಗುರುಳುವ ಕೆಲವೇ ನಿಮಿಷಗಳ ಮೊದಲು ಶಾಲಾ ಬಸ್ ಅದೇ ಮಾರ್ಗದಲ್ಲಿ ತೆರಳಿತ್ತು. ಅದೃಷ್ಟವಶಾತ್ ಶಾಲಾ ವಾಹನ ತೆರಳಿದ ಬಳಿಕ ಮರ ಬಿದ್ದ ಪರಿಣಾಮ ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ.

ಸದ್ಯ ಮೆಸ್ಕಾಂ ಲೈನ್ ಮ್ಯಾನ್ ಗಳು ವಿದ್ಯುತ್ ಕಂಬ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಸ್ಥಳಕ್ಕೆ ಪಂಚಾಯತ್ ಪ್ರತಿನಿಧಿಗಳು ಆಗಮಿಸಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

You cannot copy content from Baravanige News

Scroll to Top