Sunday, September 8, 2024
Homeಸುದ್ದಿಕರಾವಳಿವಿದ್ಯುತ್‌ ಆಘಾತದಿಂದ ಗಾಯಗೊಂಡಿದ್ದ ಎಲೆಕ್ಟ್ರಿಷಿಯನ್ ಸಾವು

ವಿದ್ಯುತ್‌ ಆಘಾತದಿಂದ ಗಾಯಗೊಂಡಿದ್ದ ಎಲೆಕ್ಟ್ರಿಷಿಯನ್ ಸಾವು

ಉಡುಪಿ : ಮೂನಿಡಂಬೂರು ಗ್ರಾಮದ ಎಲೆಕ್ಟ್ರಿಶಿಯನ್‌ ವೃತ್ತಿ ಮಾಡಿಕೊಂಡಿದ್ದ ಗಣೇಶ್‌ ಭಂಡಾರಿ (58) ಅವರು ಮನೆಯ ಹತ್ತಿರದ ಪಿ. ಎಲ್‌. ರಾವ್‌ ಅವರ ಮನೆಯ ಹಿಂಬದಿ ಎಲೆಕ್ಟ್ರಿಶಿಯನ್‌ ಕೆಲಸ ಮಾಡುತ್ತಿದ್ದಾಗ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಬಿದ್ದಿದ್ದು, ಕುತ್ತಿಗೆಯು ಸಿಮೆಂಟ್‌ ಕಟ್ಟೆಗೆ ತಾಗಿ ತೀವ್ರ ಅಸ್ವಸ್ಥರಾಗಿದ್ದರು.

ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸಗೆ ದಾಖಲಿಸಲಾಗಿತ್ತು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕುಟುಂಬವು ಗಣೇಶ್‌ ಅವರನ್ನು  ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಜು.18ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News