Tuesday, September 17, 2024
Homeಸುದ್ದಿಕರಾವಳಿಉಡುಪಿ : ವೃದ್ಧೆಯ ಸರ ಕಸಿದು ಪರಾರಿ

ಉಡುಪಿ : ವೃದ್ಧೆಯ ಸರ ಕಸಿದು ಪರಾರಿ

ಉಡುಪಿ : ಉಡುಪಿ ಹಾಗೂ ಮಣಿಪಾಲ ಭಾಗದಲ್ಲಿ ವಿಭಿನ್ನ ಮಾದರಿಯ ಕಳ್ಳತನ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿದೆ.

ಮಣಿಪಾಲ ಠಾಣೆ ವ್ಯಾಪ್ತಿಯ ಹಯಗ್ರೀವ ನಗರದ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಂತಾ ಕಾಮತ್‌ (84) ಅವರ 20 ಗ್ರಾಂ ತೂಕದ ಚೈನ್‌ ಅನ್ನು ಕಳ್ಳನೊಬ್ಬ ಕಸಿದು ಪರಾರಿಯಾಗಿರುವ ಘಟನೆ ಆ.5ರಂದು ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ.

ಶಾಂತಾ ಮನೆ ಕೆಲಸಕ್ಕೆಂದು ಸಗ್ರಿನೋಳೆ ಶಾಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಂಡೇಲು ಎಂಬಲ್ಲಿಗೆ ತಲುಪಿದಾಗ ಹಿಂದುಗಡೆಯಿಂದ ಬಂದ ವ್ಯಕ್ತಿ ಚೈನ್‌ ಕಸಿದು ಪರಾರಿಯಾಗಿದ್ದಾನೆ.ಕಳ್ಳ ಸುಮಾರು 30ರಿಂದ 35 ವರ್ಷದವನು ಎಂದು ಅಂದಾಜಿಸಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News