Tuesday, September 17, 2024
Homeಸುದ್ದಿಉಡುಪಿ: ಮಾದಕ ವಸ್ತು ಸೇವಿಸಿದ ನಾಲ್ವರು ಯುವಕರ ಬಂಧನ

ಉಡುಪಿ: ಮಾದಕ ವಸ್ತು ಸೇವಿಸಿದ ನಾಲ್ವರು ಯುವಕರ ಬಂಧನ

ಉಡುಪಿ, ಆ.14: ಮಾದಕ ವಸ್ತು ಸೇವನೆ ಮಾಡುತ್ತಿದ್ದ ನಾಲ್ವರು ಯುವಕರನ್ನು ತ್ರಾಸಿ ಬೀಚ್ ಪಾರ್ಕ್ ಬಳಿ ಗಂಗೊಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಮೆಹತಾಬ್ ಶರೀಫ್ (30), ಅರ್ಷದ್ ನೌಶಾದ್ (21), ಮೊಹಮ್ಮದ್ ಇಮ್ರಾನ್ (30) ಮತ್ತು ರೋಹಿತ್ (32) ಎಂದು ಗುರುತಿಸಲಾಗಿದೆ.

ಕರ್ತವ್ಯದ ವೇಳೆ ನಾಲ್ವರು ಯುವಕರು ಅನುಮಾನಾಸ್ಪದವಾಗಿ ಮಾದಕ ದ್ರವ್ಯ ಸೇವಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಸವರಾಜ ಕನಶೆಟ್ಟಿ ಅವರು ತಮ್ಮ ಕರ್ತವ್ಯದ ವೇಳೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

ಬಳಿಕ ಶಂಕಿತ ಆರೋಪಿಗಳನ್ನು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗಳ ಮುಂದೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಶಂಕಿತ ಆರೋಪಿಗಳು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News