ಶಿರ್ವ: ಬೇಲಿಗೆ‌‌ ಬಿದ್ದ‌‌ ಚಿರತೆಯನ್ನು ಸುರಕ್ಷಿತವಾಗಿ‌ ಕಾಡಿಗೆ‌‌‌ ಸಾಗಿಸಿದ‌ ಅರಣ್ಯಾಧಿಕಾರಿಗಳು!

ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಪಾಡಿ ಪದವು ಎಂಬಲ್ಲಿ ಚಿರತೆಯೊಂದು ತಂತಿ ಬೇಲಿಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ.

ಇಲ್ಲಿನ ಅಶ್ವಥಕಟ್ಟೆ ಬಳಿಯ ಶಿರ್ವ- ಪಳ್ಳಿ ರಸ್ತೆ ಬದಿಯ ಕಾಡಿನಲ್ಲಿ ಈ‌ ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ, ಪಡುಬಿದ್ರಿ ವಲಯದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅರವಳಿಕೆ ತಜ್ಞರಿಗೆ ಮಾಹಿತಿ ನೀಡಿದ್ದಾರೆ.

ಚಿರತೆಗೆ ಪ್ರಜ್ಞೆ ಬರುತ್ತಿದ್ದಂತೆ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಶಿರ್ವದ ಈ ಪರಿಸರದಲ್ಲಿ ಚಿರತೆಯ ಕಾಟದಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಸದ್ಯ ಒಂದು ಚಿರತೆ ಸೆರೆ ಸಿಕ್ಕಿರುವುದರಿಂದ ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ.

ಉಡುಪಿಯ ಪಶುವೈದ್ಯೆ ಪೃಥ್ವಿ ಸಾಲ್ಯಾನ್ ಬಂದು ಅರೆವಳಿಕೆ ನೀಡಿದ್ದಾರೆ. ಅಪಾಯ ಕಡಿಮೆಯಾಗಿರುವುದು ಖಾತ್ರಿಯಾಗುತ್ತಿದ್ದಂತೆ, ಸ್ಥಳೀಯರ ನೆರವಿನೊಂದಿಗೆ ಚಿರತೆಯನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

You cannot copy content from Baravanige News

Scroll to Top