ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಶನ್: ನೂತನ ಸಂಘದ ಅಧ್ಯಕ್ಷರಾಗಿ ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿ ಆಯ್ಕೆ!

ಉಡುಪಿ ಡಿ. 14: ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಶನ್ ನೂತನ ಸಂಘದ ಅಧ್ಯಕ್ಷರಾಗಿ ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿ ಇವರನ್ನು ಉದ್ಯಾವರ ಬಲಾಯಿಪಾದೆ ನಿತ್ಯಾನಂದ ಸಭಾಭವನದಲ್ಲಿ ನಿನ್ನೆ (ಡಿ.13) ನಡೆದ ಪ್ರಥಮ ಕಮಿಟಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಶ್ರೀಯುತ ದಾಮೋದರ್ ಪೈ ಕುಂದಾಪುರ, ಪ್ರಧಾನ ಕಾರ್ಯದರ್ಶೀಯಾಗಿ ಶ್ರೀಯುತ ಹರೀಶ್ ಸಂತೆಕಟ್ಟೆ, ಉಪಾಧ್ಯಕ್ಷರುಗಳಾಗಿ ಶ್ರೀಯುತ ರೆಹಮತ್ ಕಿನ್ನಿಮುಲ್ಕಿ,ಶ್ರೀಯುತ ಹರೀಶ್ ಕಡೆ ಕಾರ್, ಶ್ರೀಯುತ ಅರುಣ್ ಡಿಸಿಲ್ವ ಬ್ರಹ್ಮಾವರ,ಶ್ರೀಯುತ ಸುಧಾಕರ ಕಾರ್ಕಳ, ಕೋಶಾಧಿಕಾರಿಯಾಗಿ ಶ್ರೀಯುತ ಗುರು ಉಡುಪಿ, ಸಂಘಟನಾ ಕಾರ್ಯದರ್ಶೀಯಾಗಿ ಶ್ರೀಯುತ ರಿಜ್ವಾನ್ ಕಟಪಾಡಿ, ಕಾರ್ಯದರ್ಶೀಗಳಾಗಿ ಶ್ರೀಯುತ ಸುರೇಶ್ ಹೆಬ್ರಿ,ಸಂದೀಪ್ ಮಣಿಪಾಲ್,ಸಲಹಾ ಸಮಿತಿ ಸದಸ್ಯರು ಗಳನ್ನಾಗಿ ಶ್ರೀಯುತ ರಾಜೇಶ್ ಬೆಳ್ಮಣ್, ಶ್ರೀಯುತ ಪ್ರಸನ್ನ ಅಜೆಕಾರ್, ಶ್ರೀಯುತ ಪ್ರಶಾಂತ್ ತೆಕ್ಕಟ್ಟೆ,ಶ್ರೀಯುತ ಯೋಗೀಶ್ ಕೋಟ,ಶ್ರೀಯುತ ಶರತ್ ಶೆಟ್ಟಿ ಸಿದ್ದಾಪುರ,ಶ್ರೀಯುತ ಸಂತೋಷ್ ಪೇತ್ರಿ,ಶ್ರೀಯುತ ಗುರು ಬೈಂದೂರು ರವರನ್ನು ಆಯ್ಕೆಮಾಡಲಾಯಿತು.

You cannot copy content from Baravanige News

Scroll to Top