ಶಿರ್ವ: ದ್ವಿಚಕ್ರ ಮತ್ತು ಪಿಕಪ್ ವಾಹನ ಡಿಕ್ಕಿ-ಸವಾರ ಮೃತ್ಯು!

ಶಿರ್ವಾ ಫೆ.9 : ದ್ವಿಚಕ್ರ ವಾಹನಕ್ಕೆ ಪಿಕಪ್ ವಾಹನ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಗಣಪನಕಟ್ಟೆ ಬಳಿ ನಡೆದಿದೆ.

ಕಲ್ಯಾ ಗ್ರಾಮದ ಹರೀಶ್ ನಾಯ್ಕ್(36) ಮೃತಪಟ್ಟವರು.  ಸಂತೆಕಟ್ಟೆಯ BELL O SEAL VALVES PRIVATE LIMITED ಕಂಪೆನಿಯಲ್ಲಿ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ನಾಯ್ಕ್ ಅವರು ರಾತ್ರಿ ಕರ್ತವ್ಯ ನಿರ್ವಹಿಸಿ ಇಂದು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ತಮ್ಮ ಹೊಸ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟಿದ್ದರು.

ಈ ವೇಳೆ ಮೂಡುಬೆಳ್ಳೆ – ಕಟ್ಟಿಂಗೇರಿ ಕಡೆಗೆ ಸಾಗುವ ರಸ್ತೆಯ ಗಣಪನಕಟ್ಟೆ ಬಳಿ ತಲುಪಿದಾಗ ಕಟ್ಟಿಂಗೇರಿ ಕಡೆಯಿಂದ ಮೂಡುಬೆಳ್ಳೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಪಿಕಪ್ ವಾಹನವನ್ನು ಚಲಾಯಿಸಿಕೊಂಡು ಬಂದ ಅದರ ಚಾಲಕ ಅಶೋಕ್ ವಿ. ಕುಂದರ್ ಎಂಬಾತ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಹರೀಶ್ ನಾಯ್ಕ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಹರೀಶ್ ನಾಯ್ಕ್ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top