ತೆಲಂಗಾಣ ಮೂಲದ ಎಂಐಟಿ ವಿದ್ಯಾರ್ಥಿ ನಾಪತ್ತೆ

ಮಣಿಪಾಲ: ಹೆರ್ಗಾ ಗ್ರಾಮದ ಈಶ್ವರ ನಗರದ ನಿವಾಸಿ ಎಂ.ಐ.ಟಿಯ ತೆಲಂಗಾಣ ಮೂಲದ ವಿದ್ಯಾರ್ಥಿಯೊಬ್ಬರು ಮಾ.1 ರಿಂದ ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ತೆಲಂಗಾಣ ಇಬ್ರಾಹಿಮ್ ನಗರದ ನಿವಾಸಿ ಆದಿತ್ಯ ಪಾಂಡೆ (20) ನಾಪತ್ತೆಯಾಗಿರುವವರು.

ಮಣಿಪಾಲದ ಹೆರ್ಗಾ ಗ್ರಾಮದ ಈಶ್ವರ ನಗರದಲ್ಲಿರುವ ಪವಿತ್ರ ರೆಸಿಡೆನ್ಸಿಯಲ್ಲಿ ವಾಸವಾಗಿದ್ದ ಆದಿತ್ಯ ಪಾಂಡೆ ಅವರು ಎಂಐಟಿ ಕಾಲೇಜಿನಲ್ಲಿ 3ನೇ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಇವರಿಗೆ
ಮೊಬೈಲ್ ನಲ್ಲಿ ಆನ್ ಲೈನ್ ಆಟ ಆಡುವ ಅಭ್ಯಾಸವಿದ್ದು, ಇದೇ ವಿಷಯದಲ್ಲಿ ಮಾನಸಿಕ ಖಿನ್ನತೆಗೊಳಗಾಗಿದ್ದರು. ಮಾ.1 ರಂದು ರಾತ್ರಿ ತನ್ನ ರೂಮ್ ನಿಂದ ಹೊರಗೆ ಹೋಗಿದ್ದ ಅವರು ಹಿಂತಿರುಗಿ ಬಾರದೇ ಕಾಣೆಯಾಗಿದ್ದಾರೆ.

ಆದಿತ್ಯ ಪಾಂಡೆ ರವರ ಬಗ್ಗೆ ಸಂಬಂಧಿಕರ ಮತ್ತು ಸ್ನೇಹಿತರ ಮನೆಯಲ್ಲಿ ವಿಚಾರಿಸಿ ಹುಡುಕಾಡಿದರೂ ಎಲ್ಲೂ ಈ ತನಕ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಆದಿತ್ಯ ಅವರ ತಮ್ಮ ಕೃಷ್ಣ ಪಾಂಡೆ ಎಂಬವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top