ಬೈಕ್ ಡಿಕ್ಕಿ : ಸವಾರರಿಗೆ ಗಾಯ..!!

ಕಾರ್ಕಳ : ಬೋಳ ಗ್ರಾಮದ ಬೋಳ ಪದವು ಎಂಬಲ್ಲಿ ಬೈಕ್‌ಗಳು ಡಿಕ್ಕಿಯಾಗಿ ಸವಾರ ಗಣೇಶ್ ಪ್ರಸಾದ್ (25) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಣೇಶ್ ಪ್ರಸಾದ್ ಅವರು ಬೆಳಿಗ್ಗೆ ಬೈಕ್‌ನಲ್ಲಿ ಕಾಲೇಜಿಗೆ ಹೋಗುವಾಗ ಮಂಜರಪಲ್ಕೆ ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿದೆ.

ವಿನೋದ್ ಎಂಬವರು ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಎರಡೂ ಬೈಕಿನ ಸವಾರರು ರಸ್ತೆಗೆ ಬಿದ್ದಿದ್ದು, ಗಣೇಶ್ ಪ್ರಸಾದ್ ಅವರ ಬಲಕಾಲಿನ ಮೂಳೆ ಮುರಿದಿದೆ.

ವಿನೋದ್ ಮತ್ತು ಅವರ ಬೈಕಿನ ಹಿಂಬದಿ ಸವಾರ ಗಾಯಗೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

You cannot copy content from Baravanige News

Scroll to Top