ಬೈಂದೂರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವತಿ ಮೃತ್ಯು

ಬೈಂದೂರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವತಿಯೊಬ್ಬರು ಮೃತಪಟ್ಟ ಘಟನೆ ಗೋಳಿಹೊಳೆ ಗ್ರಾಮದ ಅರೆಹೊಳೆಮನೆ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ರೇಖಾ (29) ಮೃತಪಟ್ಟವರು.

ಇವರು ನಿನ್ನೆ ಬೆಳಿಗ್ಗೆ ಗೋಳಿಹೊಳೆ ಗ್ರಾಮದ ಅರೆಹೊಳೆಮನೆ ಎಂಬಲ್ಲಿನ ಮನೆಯ ಬಳಿಯ ತೋಟದಲ್ಲಿ ತೆಂಗಿನ ಮತ್ತು ಅಡಿಕೆ ಮರಕ್ಕೆ ನೀರು ಬಿಡುತ್ತಿದ್ದ ವೇಳೆ ಮೂರ್ಛೆ ರೋಗದಿಂದ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದರು.

ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ರೇಖಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ತಂಗಿ ನೀಡಿದ ಮಾಹಿತಿಯಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top