ಮಂಗಳೂರು,ಉಡುಪಿಯಲ್ಲಿ ಇಂದಿನಿಂದ ರಂಜಾನ್ ಉಪವಾಸ ಆರಂಭ

ಮಂಗಳೂರು/ಉಡುಪಿ (ಮಾ.23) : ಕರಾವಳಿಯಲ್ಲಿ ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ನಾಳೆಯಿಂದ (ಮಾ. ಗುರುವಾರ) ಆರಂಭವಾಗಲಿದ್ದು ಒಂದು ತಿಂಗಳ ಕಾಲ ಈ ಆಚರಣೆ ನಡೆಯಲಿದೆ.


ಕೇರಳದ ಕಾಪಾಡ್ ನಲ್ಲಿ ಚಂದ್ರ ದರ್ಶನ ಆದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಜಿಲ್ಲಾ ಖಾಝಿ ಶೈಖುನಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಉಪವಾಸ ಆರಂಭಿಸಲು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಕರಾವಳಿಯಲ್ಲಿ ಗುರುವಾರ ಆರಂಭವಾಗಲಿದೆ ಉಳಿದೆಲ್ಲೆಡೆ ಶುಕ್ರವಾರದಿಂದ ಉಪವಾಸ ಮಾಸ ಆರಂಭವಾಗಲಿದೆ.

Scroll to Top