ಮತ ಹಾಕಿದ್ದ ಹಿರಿಯ ಜೀವ ಫಲಿತಾಂಶ ಬರುವ ಮುನ್ನವೇ ಮೃತ್ಯು..!!!

ತೆಕ್ಕಟ್ಟೆ : ಮನೆ ಮನೆಯಿಂದಲೇ ಮತದಾನ ಮಾಡಿ, ಫಲಿತಾಂಶ ಬರುವ ಮೊದಲೇ ವೃದ್ದರೋರ್ವರು ಸಾವನ್ನಪ್ಪಿದ ಘಟನೆ ಮೇ 3 ರಂದು ಸಂಭವಿಸಿದೆ.

ಇಲ್ಲಿನ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಿವೃತ್ತ ಶಿಕ್ಷಕ ಮಾಲಾಡಿ ಗುರುರಾಜ ಭಟ್‌ (94) ಅವರು ಎ.30 ರಂದು ಮನೆಯಿಂದಲೇ ತಮ್ಮ ಹಕ್ಕನ್ನು ಚಲಾಯಿಸಿದ್ದು, ಮೇ 3 ರಂದು ಅಸೌಖ್ಯದಿಂದ ನಿಧನ ಹೊಂದಿದ್ದಾರೆ.

ಮತಗಟ್ಟೆ ಸಂಖ್ಯೆ 82ರಲ್ಲಿ ಇರುವ ಇವರು ಮಕ್ಕಳೆಲ್ಲ ಹೊರ ಜಿಲ್ಲೆಗಳಲ್ಲಿ ಉದ್ಯೋಗದಲ್ಲಿರುವ ಹಿನ್ನೆಲೆಯಲ್ಲಿ ಮತಗಟ್ಟೆಯೆಡೆಗೆ ಬಂದು ಮತ ಚಲಾಯಿಸಲು ಕಷ್ಟಸಾಧ್ಯವಾದ ಪರಿಣಾಮ ಮನೆಯಿಂದಲೇ ಮತದಾನ ಮಾಡುವುದಾಗಿ ನೋಂದಾಯಿಸಿಕೊಂಡಿದ್ದರು. ಅದರಂತೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬಂದಿಗಳು ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರು. ಆದರೆ ತಮ್ಮ ಹಕ್ಕು ಚಲಾಯಿಸಿದ ಹಿರಿಯರಾದ ಮಾಲಾಡಿ ಗುರುರಾಜ ಭಟ್‌ ಅವರು ಫಲಿತಾಂಶ ಬರುವ ಮೊದಲೇ ಸಾವನ್ನಪ್ಪಿರುವುದು ನಿಜಕ್ಕೂ ಬೇಸರದ ಸಂಗತಿ.

You cannot copy content from Baravanige News

Scroll to Top