ಮತದಾನದಂದು ಅನುಮತಿ ಪಡೆಯದೆ ಸಂತೆ,ಜಾತ್ರೆ,ಉತ್ಸವ ನಡೆಸುವಂತಿಲ್ಲ- ಉಡುಪಿ ಜಿಲ್ಲಾಧಿಕಾರಿ ಆದೇಶ

ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ನಡೆಯುವ ಕಾರಣ ಆ ದಿನ ಪೂರ್ವ ಅನುಮತಿ ಪಡೆಯದೆ ಯಾವುದೇ ಸಂತೆ, ಜಾತ್ರೆ ಅಥವಾ ಉತ್ಸವಗಳನ್ನು ನಡೆಸಬಾರದು ಎಂದು ಉಡುಪಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.


ಮೇ 10ರಂದು ಬೆಳಿಗ್ಗೆ 6 ಗಂಟೆಯಿಂದ ಚುನಾವಣೆ ಮತದಾನ ಮುಕ್ತಾಯ ಆಗುವವರೆಗೆ ಉಡುಪಿ ಜಿಲ್ಲೆಯಾದ್ಯಂತ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ಹಾಗೂ ಪೂರ್ವಾನುಮತಿ ಪಡೆಯದೆ ಉತ್ಸವಗಳನ್ನು ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

You cannot copy content from Baravanige News

Scroll to Top