ಕಾರ್ಕಳ: ಸುನಿಲ್ ಕುಮಾರ್ ಪರ ಯೋಗಿ ಆದಿತ್ಯನಾಥ್‌‌ ಭರ್ಜರಿ ರೋಡ್ ಶೋ

ಕಾರ್ಕಳ, ಮೇ.06: ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಪರವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಬಿಜೆಪಿ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು.

ಈ ಸಂಧರ್ಭದಲ್ಲಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಪರಶುರಾಮನ ಭೂಮಿಗೆ ಬಂದು ಆನಂದವಾಗಿದೆ. ಅಯೋದ್ಯಾ ರಾಮನ ಊರಿನಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ. ನಾನು ಹನುಮನ ಜನ್ಮಭೂಮಿಗೆ ಬಂದಿದ್ದೇನೆ. ವನವಾಸ ಕಾಲದಲ್ಲಿ ಕರ್ನಾಟಕ ದಲ್ಲೇ ರಾಮನಿಗೆ ಹನುಮನ ಸಾಂಗತ್ಯ ದೊರಕಿತು. ಹನುಮಂತ ರಾವಣನ ಲಂಕೆಯನ್ನು ನಾಶ ಮಾಡಿ ಅಧರ್ಮ ಹೋಗಲಾಡಿಸಲು ಸಹಕರಿದ್ದ. ಅದೇ ರೀತಿ‌ ನೀವು ರಾಷ್ಟ್ರಭಕ್ತ ಜನರು ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ನ ಅಧರ್ಮ ಹೋಗಲಾಡಿಸಬೇಕು.

ಪಿಎಫ್ಐ ಗೆ ಬೆಂಬಲ ನೀಡುವವರನ್ನು ಸೋಲಿಸಬೇಕು. ಮತ್ಯೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ತನ್ನಿ. ನಿಮ್ಮ ಉತ್ಸಾಹ‌ ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ಬರುವುದರ ಸೂಚನೆಯಾಗಿದೆ. ಈಗ ಭಾರತದ ವಿಶ್ವದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ದೇಶದ ಐಟಿ ಹಬ್ ಆಗಿ ಕರ್ನಾಟಕ, ದೊಡ್ಡ ಕೊಡುಗೆ ನೀಡಿದೆ. ಕರ್ನಾಟಕ ಭಾರತದ ವಿಕಾಸಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಟೀಂ ಇಂಡಿಯಾಗೆ ಮೋದಿ ಕ್ಯಾಪ್ಟನ್ ಆಗಿದ್ದಾರೆ. ಪ್ರಧಾನಿ ಮೋದಿ ತಂಡದಲ್ಲಿ ಕರ್ನಾಟಕ ಯಾವತ್ತೂ ಇರಬೇಕು. ನೀವು ಯಾವತ್ತೂ ರಾಷ್ಟ್ರವಾದಕ್ಕೆ ಸಹಕಾರ ನೀಡಿದ್ದೀರಿ. ರಾಷ್ಟವಾದದ ಕಿಡಿ‌ ಮನೆ ಮನೆ ತಲುಪಬೇಕು. ಸುನೀಲ್ ಕುಮಾರ್ ನಿಮ್ಮ ಅಭ್ಯರ್ಥಿ ಅವರನ್ನು ಗೆಲ್ಲಿಸಬೇಕು.

ಜನವರಿಯಲ್ಲಿ ಅಯೋದ್ಯೆಯಲ್ಲಿ ರಾಮಂಮದಿರ ಪೂರ್ಣವಾಗುತ್ತೆ. ರಾಮಮಂದಿರದಲ್ಲಿ‌ಕರ್ನಾಟಕ ಕರಸೇವಕರ ಕೊಡುಗೆ ದೊಡ್ಡದು. ಭವ್ಯ ಮಂದಿರ ನಿರ್ಮಾಣದ ವೇಳೆ ಕರ್ನಾಟಕ ವಾಸಿಗಳನ್ನು ಆಹ್ವಾನಿಸಲು ಬಂದಿದ್ದೇನೆ . ನಿಮಗೆಲ್ಕಾ ಆಮಂತ್ರಣ ನೀಡಲು ಬಂದಿದೇನೆ. ಭವ್ಮಮಂದಿರ ನಿರ್ಮಾಣ ಆಗುತ್ತೆ. ರಾಮಮಂದಿರದ ಮೂಲಕ ರಾಮರಾಜ್ಯದ ಸುಪ್ರಭಾತ ವಾಗಲಿದೆ ಎಂದರು.

ಕಾರ್ಕಳದ ಅನಂತಶಯನ ವೃತ್ತದಿಂದ ಗಾಂಧಿ ಮೈದಾನದವರೆಗೆ ನಡೆದ ರೋಡ್ ಶೋ ದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು.ಈ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಇಂಧನ ಸಚಿವರಾದ ಹಾಗೂ ವಿಧಾನಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಅನೇಕ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಉಪಸ್ಥಿತರಿದ್ದರು.

Baravanige News

Translate »

You cannot copy content from Baravanige News

Scroll to Top