ಬ್ರಹ್ಮಾವರ: ದಾರಿಹೋಕ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಕರಿಮಣಿ ಸರ ಎಳೆದು ಪರಾರಿಯಾದ ಖದೀಮರು

ಬ್ರಹ್ಮಾವರ ಜೂ.12: ತಾಲೂಕಿನ ಚಾಂತಾರು ಗ್ರಾಮದ ರಸ್ತೇಶ್ವರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಳೆದು ಪರಾರಿಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಇಂದು ಬೆಳಿಗ್ಗೆ ಪಾರ್ವತಿ ಅವರು ತನ್ನ ಗಂಡ ಶಂಭು ಪೂಜಾರಿ ಯವರೊಂದಿಗೆ ಮನೆಯಿಂದ ಬ್ರಹ್ಮಾವರದ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದು ಮಧ್ಯಾಹ್ನದ ಸುಮಾರಿಗೆ ವಾಪಾಸ್ಸು ಮನೆಗೆ ಬ್ರಹ್ಮಾವರದ ಚಾಂತಾರು ಗ್ರಾಮದ ರಸ್ತೇಶ್ವರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಡೆದುಕೊಂಡು ಬಂದ ಆರೋಪಿಯು ಪಾರ್ವತಿ ಅವರು ಧರಿಸಿದ್ದ ಅಂದಾಜು 1,80,000 ರೂ. ಮೌಲ್ಯದ 4 ಪವನ್ ಚಿನ್ನದ ಕರಿಮಣಿ ಸರವನ್ನು ಎಳೆದು ದ್ವಿಚಕ್ರ ವಾಹನ ದಲ್ಲಿ ಬಂದ ಮತ್ತೋರ್ವ ಆರೋಪಿಯೊಂದಿಗೆ ಬ್ರಹ್ಮಾವರ ಪೇಟೆ ಕಡೆಗೆ ಪರಾರಿಯಾಗಿದ್ದಾನೆ ಎಂಬುದಾಗಿ ಪಾರ್ವತಿ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top