Tuesday, September 17, 2024
Homeಸುದ್ದಿಆಟೋದಲ್ಲಿ ಕಳುಹಿಸಿದ್ದಕ್ಕೆ ಬಿರಿಯಾನಿ ವಾಪಸ್; ಬೆಂಜ್ ಕಾರ್‌ಗೆ ಶಿಫ್ಟ್ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಿದ ಜಮೀರ್

ಆಟೋದಲ್ಲಿ ಕಳುಹಿಸಿದ್ದಕ್ಕೆ ಬಿರಿಯಾನಿ ವಾಪಸ್; ಬೆಂಜ್ ಕಾರ್‌ಗೆ ಶಿಫ್ಟ್ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಿದ ಜಮೀರ್

ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಭರ್ಜರಿ ಬಾಡೂಟ ಕಳುಹಿಸಿದ್ದಾರೆ. ಆದರೆ ಆಟೋ ರಿಕ್ಷಾದಲ್ಲಿ ಕಳುಹಿಸಲಾಗಿದ್ದ ಬಿರಿಯಾನಿಯನ್ನು ಸಿಎಂ ನಿವಾಸದೊಳಗೆ ತೆಗೆದುಕೊಂಡು ಹೋಗಲು ಪೊಲೀಸರು ಬಿಡದ ಹಿನ್ನೆಲೆ ಬೆಂಜ್ ಕಾರ್‌ನಲ್ಲಿ ಕೊಂಡೊಯ್ಯಲಾಗಿದೆ.

ಹೌದು, ಜಮೀರ್ ಅಹಮದ್ ಖಾನ್ ಅವರು ಹಬ್ಬದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಆಟೋದಲ್ಲಿ ಬಿರಿಯಾನಿ ಕಳುಹಿಸಿದ್ದರು. ಸಿಎಂ ಸರ್ಕಾರಿ ನಿವಾಸದ ಬಳಿ ಆಟೋದಲ್ಲಿ ಬಂದ ಬಿರಿಯಾನಿಯನ್ನು ಅನುಮತಿ ಇಲ್ಲದೆ ಒಳಗೆ ಕೊಂಡುಹೋಗಲು ಬಿಡಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೊನೆಗೂ ಅನುಮತಿ ಸಿಗದ ಹಿನ್ನೆಲೆ ಆಟೋದಲ್ಲಿ ತಂದಿದ್ದ ಬಿರಿಯಾನಿಯನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಬಳಿಕ ಬಿರಿಯಾನಿಯನ್ನು ಹೇಗಾದ್ರೂ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಲೇಬೇಕು ಎಂದು ಜಮೀರ್ ಬೆಂಬಲಿಗರು ಅದನ್ನು ಬೆಂಜ್ ಕಾರಿಗೆ ಶಿಫ್ಟ್ ಮಾಡಿದ್ದಾರೆ.

ಬೆಂಜ್ ಕಾರಿನಲ್ಲಿ ಬಿರಿಯಾನಿ ಇಟ್ಟು ಕೊನೆಗೂ ಸಿಎಂ ನಿವಾಸದೊಳಗೆ ತೆರಳಿ ಅದನ್ನು ಅಲ್ಲಿ ಇಳಿಸಿ ಜಮೀರ್ ಬೆಂಬಲಿಗರು ವಾಪಸಾಗಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News