Sunday, September 8, 2024
Homeಸುದ್ದಿಉಪ್ಪುಂದ: ಮೀನುಗಾರಿಕಾ ಬೋಟ್ ಮುಳುಗಡೆ; ಇಬ್ಬರು ನೀರುಪಾಲು

ಉಪ್ಪುಂದ: ಮೀನುಗಾರಿಕಾ ಬೋಟ್ ಮುಳುಗಡೆ; ಇಬ್ಬರು ನೀರುಪಾಲು

ಉಪ್ಪುಂದ(ಬೈಂದೂರು): ಇಲ್ಲಿನ ಕರ್ಕಿಕಳಿ ಎಂಬಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ಇಬ್ಬರು ನೀರುಪಾಲಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಮೀನುಗಾರಿಕೆ ತೆರಳಿದ ದೋಣಿಯು ವಾಪಸ್ ಬರುವಾಗ ಅಲೆಗಳಿಗೆ ಸಿಕ್ಕಿ ಮಗುಚಿದೆ. ದೋಣಿಯಲ್ಲಿದ್ದ 6 ಜನ ಪೈಕಿ ಒಬ್ಬರು ಕೊಚ್ಚಿ ಹೋಗಿದ್ದು, ಅಲೆಗಳಿಗೆ ಸಿಕ್ಕಿದ್ದ ಇನ್ನೊಬ್ಬರನ್ನು ದಡಕ್ಕೆ ತರಲಾಗಿದ್ದು ಚಿಂತಾಜನಕ ಸ್ಥಿಯಲ್ಲಿದ್ದ ವೇಳೆ ಆಸ್ಪತ್ರೆಗೆ ದಾಖಲು ಮಾಡಲು ಕೊಂಡೊಯ್ಯುತ್ತಿದ್ದ ವೇಳೆ ಮೃತ ಪಟ್ಟಿರುವುದಾಗಿ ವರದಿಯಾಗಿದೆ.

ಮೃತ ದುರ್ದೈವಿಗಳು ನಾಗೇಶ್ (30), ಸತೀಶ್ (29) ಎಂದು ಗುರುತಿಸಲಾಗಿದೆ. ಸಚಿನ್ ಎನ್ನುವರ ಮಾಲಕತ್ವದ ಮರ್ಲು ಚಿಕ್ಕು ಹೆಸರಿನ ದೋಣಿ ಸಂಪೂರ್ಣವಾಗಿ ಮುಳುಗಡೆಯಾಗಿದೆ.ಕಡಲ ಪಾಲಾದ ಮೀನುಗಾರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಉಳಿದ ನಾಲ್ವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News