ಉಡುಪಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್‌ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಎ.ಆರ್. ಆಯ್ಕೆ

ಉಡುಪಿ : ಪ್ರತಿಷ್ಠಿತ ಉಡುಪಿ ಜಿಲ್ಲಾ ವಕೀಲರ ಸಂಘದ 2023-25ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ ಎ. ಆರ್. ಚುನಾಯಿತರಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರೆನೋಲ್ಡ್ ಪ್ರವೀಣ್ ಕುಮಾರ್ ಇವರು ವಿವಿಧ ಅವಧಿಗಳಲ್ಲಿ 10 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಮಿತ್ರ ಕುಮಾರ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ರವೀಂದ್ರ ಬೈಲೂರು, ಖಜಾಂಚಿಯಾಗಿ ಗಂಗಾಧರ ಎಚ್.ಎಮ್., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಕ್ರೀಡಾ ಕಾರ್ಯದರ್ಶಿಯಾಗಿ ಸುಮಿತ್ ಹೆಗ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಜ್ವಲ್ ಎಸ್. ಶೆಟ್ಟಿ, ರಾಘವೇಂದ್ರ ಎಸ್, ಅಭಿಶೇಕ್ ಜೆನ್ನಿ, ಶಾರದಾ, ಆದಿತ್ಯ, ನಾಗರಾಜ ಉಪಾಧ್ಯ, ಶೋಭಿತ್ ನೊರೊನ್ಹಾ, ಕುಮಾರಿ ಶಿಲ್ಪಾ, ಆರೂರು ಸುಕೇಶ್ ಶೆಟ್ಟಿ, ಶ್ರೀಧರ್ ಸುಬ್ರಾಯ ಭಟ್, ಗುರುಪ್ರಸಾದ್ ಜಿ.ಎಸ್., ನಾಗರತ್ನ ನಾಯ್ಕ, ಬಾಲಚಂದ್ರ, ಸಂಜಯ್ ಕರ್ಕೇರ, ಪ್ರಸಾದ್ ಕುಮಾರ್ ಶೆಟ್ಟಿ, ಲವೀನಾ ಫೆರ್ನಾಂಡಿಸ್, ಸಂಜೀವ ಎ., ಗಣೇಶ್ ಕುಮಾರ್ ಮಟ್ಟು, ಹಮ್ಬತ್ ಮತ್ತು ಅಮೃತಕಲಾ ಆಯ್ಜೆಯಾಗಿದ್ದಾರೆ.‌

Scroll to Top