ತೀರ್ಥಹಳ್ಳಿಗೆ ಮತ್ತೆ ಉಗ್ರರ ಲಿಂಕ್; ನಾಲ್ವರಿಗೆ ನೋಟಿಸ್ ಕೊಟ್ಟ NIA ಅಧಿಕಾರಿಗಳು

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿಗೆ ಮತ್ತೆ ಟೆರರ್ ಲಿಂಕ್ ಅಂಟಿದ್ದು, ನಾಲ್ವರಿಗೆ ರಾಷ್ಟ್ರೀಯ ತನಿಖಾ ದಳ ನೋಟಿಸ್ ಜಾರಿ ಮಾಡಿದೆ.

ಶಿವಮೊಗ್ಗ ಐಸಿಸ್ ಮಾಡೆಲ್‌ ಸಂಬಂಧ ನಾಲ್ವರಿಗೆ ನೋಟಿಸ್ ನೀಡಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.

ತಮೀಮ್, ರಿಜ್ವಾನ್, ಶಂಶುದ್ದೀನ್ ಹಾಗೂ ನಜೀಬ್ವುಲ್ಲಾ ಎಂಬುವವರಿಗೆ ನೋಟಿಸ್ ಜಾರಿಯಾಗಿದೆ.

ಶಂಕಿತ ಉಗ್ರ ಅರಾಫತ್ ಅಲಿ ತನಿಖೆ ಆಧರಿಸಿ ನಾಲ್ವರಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ನಲ್ಲಿ ತಿಳಿಸಲಾಗಿದೆ.

ರಾಷ್ಟ್ರಧ್ವಜ ಸುಟ್ಟಿದ್ದ ಹಾಗೂ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ನಾಲ್ವರಿಗೆ ನೋಟಿಸ್ ನೀಡಲಾಗಿದೆ. ಇದೇ ಪ್ರಕರಣದಲ್ಲಿ ಶಂಕಿತ ಅರಾಫತ್ ಅಲಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಅಬ್ದುಲ್ ಮತೀನ್, ಶಾರೀಕ್, ಮಾಜ್, ಅರಾಫತ್ ಅಲಿ ಸೇರಿ ಈಗ ಮತ್ತೆ ನಾಲ್ವರು ಎನ್ಐಎ ನೋಟಿಸ್ ಜಾರಿ ಮಾಡಿದೆ..

Scroll to Top