ಕಾಪು: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ನೀರಿಗೆ ಬಿದ್ದು ಮೀನುಗಾರ ಸಾವು

ಕಾಪು: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರ ನೀರಿಗೆ ಬಿದ್ದು ಮೃತಪಟ್ಟ ಘಟನೆ ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ನಡೆದಿದೆ.

ಮಂಗಳೂರಿನ ಸಂತೋಷ (48) ಮೃತಪಟ್ಟವರು.

ಇವರು ಮಾ.8 ರಂದು ತನ್ನ ಗೆಳೆಯ ಕಿಶೋರ್ ಎಂಬಾತನೊಂದಿಗೆ ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ಮೀನುಗಾರಿಕೆ ಮಾಡುತ್ತಿದ್ದ ಸಮಯ ನೀರಿಗೆ ಬಿದ್ದು, ನೀರಿನ ಸೆಳತಕ್ಕೆ ಸಿಲುಕಿ ಸಮುದ್ರದ ಅಲೆಯಲ್ಲಿ ಕೊಚ್ಚಿಹೋಗಿದ್ದರು.

ಈ ವೇಳೆ ಇವರನ್ನು ನೀರಿನಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಬಳಿಕ ನಿನ್ನೆ ಸಂಜೆ ವೇಳೆಗೆ ಯಾರ್ಡ್ ಬೀಚ್ ಗಿಂತ 500 ಮೀಟರ್ ದೂರದಲ್ಲಿ ಸಮುದ್ರದ ದಡದಲ್ಲಿ ಸಂತೋಷ್ ಮೃತ ದೇಹ ಪತ್ತೆಯಾಗಿರುತ್ತದೆ.

ಈ ಬಗ್ಗೆ ಮೃತರ ಸಹೋದರ ದಾಮೋದರ ಎಂಬವರು ನೀಡಿದ ಮಾಹಿತಿಯಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

You cannot copy content from Baravanige News

Scroll to Top