ಬಂಟಕಲ್ಲು : ಭೀಕರ ರಸ್ತೆ ಅಪಘಾತ – ಪವಾಡ ಸದೃಶ ಚಾಲಕ, ನಿರ್ವಾಹಕ ಪಾರು..!!

ಶಿರ್ವ : ಕೆಂಪುಕಲ್ಲು ತುಂಬಿಸಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿ ಪಲ್ಟಿಯಾದ ಘಟನೆ ಬಂಟಕಲ್ಲು ಸಮೀಪ ನಡೆದಿದೆ.



ಮೂಡಬಿದ್ರೆಯಿಂದ ಬ್ರಹ್ಮಾವರಕ್ಕೆ ಕೆಂಪುಕಲ್ಲು ಕೊಂಡೊಯ್ಯುತ್ತಿದ್ದ ಟಿಪ್ಪರ್ ಲಾರಿ ಸ್ಟೇರಿಂಗ್ ರಾಡ್ ತುಂಡಾದ ಹಿನ್ನೆಲೆ ಬಂಟಕಲ್ಲು ಸಮೀಪ ಪಲ್ಟಿಯಾಗಿದೆ.



ಘಟನೆಯಲ್ಲಿ ಲಾರಿ ಸಂಪೂರ್ಣ ಮಗುಚಿ ಬಿದ್ದಿದ್ದು, ಲಾರಿಯಲ್ಲಿದ್ದ ಚಾಲಕ ಮತ್ತು ನಿರ್ವಾಹಕ ಪವಾಡ ಸದೃಶವಾಗಿ ಪಾರಾಗಿದ್ದಾರೆ ಎಂದು ವರದಿಯಾಗಿದೆ.

You cannot copy content from Baravanige News

Scroll to Top