ರಾಜ್ಯ ರಾಜಕಾರಣಕ್ಕೆ ಕೇಂದ್ರ ಬಿಜೆಪಿ ನಾಯಕ ಅನಂತಕುಮಾರ್ ಹೆಗಡೆ ಎಂಟ್ರಿ..?

ಬೆಂಗಳೂರು, ಮೇ 22: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ ಸಂಸತ್ ಪ್ರವೇಶ ಮಾಡಿರುವ, ‘ಫೈರ್ ಬ್ರಾಂಡ್’ ಖ್ಯಾತಿಯ ಸಂಸದ ಅನಂತಕುಮಾರ್ ಹೆಗಡೆ ಸದ್ಯ ಅನಾರೋಗ್ಯದ ಕಾರಣದಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದಾರೆ.

ಈ ನಡುವೆ ಕೇಂದ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣದತ್ತ ಅವರು ಮುಖ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ

ರಾಷ್ಟ್ರೀಯ ಚಿಂತನೆ ಬಗ್ಗೆ ನಿರರ್ಗಳ ಮಾತನಾಡುವ ನಾಯಕರ ಮುಂದಿಟ್ಟು ಪಕ್ಷ ಮರು ಸಂಘಟಿಸಲು ಚಿಂತನೆ ನಡೆದಿದ್ದು, ಹೆಗಡೆ ಹೆಸರನ್ನು ಸಂಘ ಪರಿವಾರ ಬಲವಾಗಿ ಪ್ರಸ್ತಾಪಿಸಿರುವುದಾಗಿ ಮೂಲಗಳು ತಿಳಿಸಿವೆ. ಚುನಾವಣೆ ವೇಳೆಯೂ ಪ್ರಚಾರಕ್ಕೆ ಬರದಿದ್ದ ಅವರನ್ನು ಸಕ್ರಿಯಗೊಳಿಸಲು ಆರ್‌ಎಸ್‌ಎಸ್‌ ಪ್ರಮುಖರ ಮೂಲಕ ಮಾತುಕತೆ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ

You cannot copy content from Baravanige News

Scroll to Top