ಉಡುಪಿ: ರಸ್ತೆಯ ಬದಿ ನಿಲ್ಲಿಸಿದ್ದ ಕಾರಿನ‌ ಗಾಜು ಒಡೆದು ನಗದು- ದಾಖಲೆ ಪತ್ರಗಳಿದ್ದ ಬ್ಯಾಗ್ ಕಳವು

ಉಡುಪಿ, ಜೂ.13: ರಥಭೀದಿಯ ಬಳಿಯ ಕನಕದಾಸ ರಸ್ತೆಯ ಬದಿ ನಿಲ್ಲಿಸಿದ್ದ ಬ್ಯಾಂಕ್ ಅಧಿಕಾರಿಯೋರ್ವರ ಕಾರಿನ ಗಾಜು ಒಡೆದು ಬ್ಯಾಗ್ ಕಳವುಗೈದ ಪ್ರಕರಣ ಇಂದು ಸಂಜೆ ನಡೆದಿದೆ.

ಬ್ಯಾಂಕ್ ಉದ್ಯೋಗಿಯೊರ್ವರು ತಮ್ಮ ಕಾರನ್ನು ನಿಲ್ಲಿಸಿ ರಥಬೀದಿಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲೇ ಹೊಂಚು ಹಾಕುತ್ತಿದ್ದ ಮೂವರು ಖದೀಮರು ಸ್ಯಾಂಟ್ರೋ ಕಾರಿನ ಗಾಜನ್ನು ಪುಡಿಗಟ್ಟಿ ಅದರಲ್ಲಿದ್ದ ಅಗತ್ಯ ದಾಖಲೆ ಪತ್ರ, ಏಳು ಸಾವಿರ ನಗದು, ಪೆನ್‌ಡ್ರೈವ್‌ಗಳಿದ್ದ ಬ್ಯಾಗ್ ಅನ್ನು ಎಗರಿಸಿ ಪರಾರಿಯಾಗಿದ್ದಾರೆ ಎಂದು‌ ಸ್ಥಳೀಯರು ‌ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಆರೋಪಿಗಳ ಸುಳಿವು ಲಭ್ಯ…?

ಮೂವರು‌ ಅಪರಿಚಿತರು ಕಳ್ಳತನಕ್ಕೆ ಹಲವು ಸಮಯದಿಂದ ಹೊಂಚು ಹಾಕುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ಆರೋಪಿಗಳ ಚಹರೆ ಘಟನೆ ನಡೆದ ಅಂಗಡಿಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದ್ದು. ಆರೋಪಿಗಳ ಪತ್ತೆಗೆ ನಗರ ಠಾಣಾ ಪೊಲೀಸರು ಬಲೆ ಬೀಸಿದ್ದಾರೆ.

Scroll to Top