ಬಂಟಕಲ್ಲು: ಎರಡು ಚಿನ್ನದ ಪದಕ ವಿಜೇತ ಪುನೀತ್ ತೇಂಡೂಲ್ಕರ್ ರವರಿಗೆ ಯುವ ವೃಂದದಿಂದ ಅಭಿನಂದನೆ

ಬಂಟಕಲ್ಲು, ಜು.13: ಪೂಣೆಯ ಸಾವಿತ್ರಿಬಾಯಿ ಫುಲೇ ವಿಶ್ವ ವಿದ್ಯಾಲಯದಿಂದ M.Sc (ಭೌತಿಕ ರಸಾಯನ ಶಾಸ್ತ್ರ) ಪದವಿ ಪಡೆದು ಎರಡು ಚಿನ್ನದ ಪದಕ ಪಡೆದು , ಶೈಕ್ಷಣೀಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಬಂಟಕಲ್ಲು ಪುನೀತ್ ತೇಂಡುಲ್ಕರ್ ಇವರನ್ನು ರಾಜಾಪುರ ಸಾರಸ್ವತ ಯುವ ವೃಂದದ ವತಿಯಿಂದ ಅವರ ಸ್ವ ಗೃಹದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಯುವ ವೃಂದದ ಗೌರವಾಧ್ಯಕ್ಷ ಕೆ ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಯುವ ವೃಂದದ ಸದಸ್ಯ , ಉಪನ್ಯಾಸಕ ಪುನೀತ್ ರವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅವರ ಸಾಧನೆಯನ್ನು ಶ್ಲಾಘಿಸಿ , ಅಭಿನಂದಿಸಿ ಶಾಲುಹೊದಿಸಿ ಸನ್ಮಾನಿಸಿದರು. ಪುನೀತ್ ರವರ ತಂದೆ ಉಪನ್ಯಾಸಕ ಶ್ರೀ ವಿಠಲ ನಾಯಕ್ , ತಾಯಿ ಉಪನ್ಯಾಸಕಿ ಶ್ರೀಮತಿ ವಸಂತಿ , ಯುವ ವೃಂದದ ಅಧ್ಯಕ್ಷ ರಾಘವೇಂದ್ರ ನಾಯಕ್, ಕಾರ್ಯದರ್ಶಿ ಅನಂತರಾಮ ವಾಗ್ಲೆ, ನಿವೃತ್ತ ಸೇನಾನಿ ರಾಜೇಂದ್ರ ಪಾಟ್ಕರ್, ಸುಬ್ರಹ್ಮಣ್ಯ ವಾಗ್ಲೆ, ಸುಧೀರ್ ಪಾಟ್ಕರ್, ಆಶಿಷ್ ಪಾಟ್ಕರ್, ವಿಶ್ವನಾಥ ಬಾಂದೇಲ್ಕರ್, ಪ್ರೀತಮ್ ಪ್ರಭು ಉಪಸ್ಥಿತರಿದ್ದರು.

Scroll to Top