ಉಡುಪಿ : ಮಹಿಳೆಯ ರಕ್ಷಣೆ : ಸೂಚನೆ

ಉಡುಪಿ : ಮಹಾರಾಷ್ಟ್ರ ಮೂಲದ ಅಪರಿಚಿತ ನೊಂದ ಮಹಿಳೆಯೊಬ್ಬರು ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಅಸಹಾಯಕರಾಗಿ ದುಃಖಿಸುತ್ತಿದ್ದು ವಿಶು ಶೆಟ್ಟಿ ಅಂಬಲಪಾಡಿ ಪೊಲೀಸರ ಸಹಾಯದಿಂದ ರಕ್ಷಿಸಿ ಉಡುಪಿ ಸಖಿ ಸೆಂಟರ್ ಗೆ ದಾಖಲಿಸಿದ ಮಾನವೀಯ ಘಟನೆ ನಡೆದಿದೆ.

ಮಹಿಳೆಯ ಬಳಿ ಆಧಾರ್ ಕಾರ್ಡ್ ಇದ್ದು ಮಹಿಳೆಯ ಹೆಸರು ಪ್ರಿಯಾಂಕಾ ಅಮಿತ್ (40) ಮಹಾರಾಷ್ಟ್ರದ ರತ್ನಗಿರಿ ಮೂಲದವರು.

ಯಾವುದೋ ಕೌಟುಂಬಿಕ ನೋವಿನಿಂದ ಬಂದಿರುವುದಾಗಿ ಮೇಲ್ನೋಟಕ್ಕೆ ತೋರುತ್ತದೆ. ಹೆಚ್ಚಿನ ಮಾಹಿತಿ ನೀಡುತ್ತಿಲ್ಲ.

ಸಂಬಂಧಿಕರು ಸಖಿ ಸೆಂಟರ್ ಅಥವಾ ಪಡುಬಿದ್ರಿ ಠಾಣೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.

You cannot copy content from Baravanige News

Scroll to Top