ಆನ್ಲೈನ್ನಲ್ಲಿ ಆರ್ಡರ್ ಮಾಡುವಾಗ ಹುಷಾರ್.. ಚಿಕನ್ ಶವರ್ಮಾ ತಿಂದು ಸಾವನ್ನಪ್ಪಿದ ಯುವಕ

ಕೊಚ್ಚಿ : ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದ ಚಿಕನ್ ಶವರ್ಮಾ ತಿಂದು ಯುವಕ ಸಾವನ್ನಪ್ಪಿರುವ ಘಟನೆ ಕೇರಳದ ಕೊಚ್ಚಿ ನಗರದಲ್ಲಿ ನಡೆದಿದೆ.

ಕೊಟ್ಟಾಯಂ ಮೂಲದ ರಾಹುಲ್ ನಾಯರ್ (24) ಸಾವನ್ನಪ್ಪಿದ ಯುವಕ.

ಆನ್ಲೈನ್ ಮೂಲಕ ಲೇ ಹಯಾತ್ ರೆಸ್ಟೋರೆಂಟ್ನಿಂದ ಚಿಕನ್ ಶವರ್ಮಾ ಆಹಾರವನ್ನು ತರಿಸಿಕೊಂಡಿದ್ದಾನೆ. ಅದನ್ನು ತಿಂದ ಬಳಿಕ ಇದ್ದಕ್ಕಿದ್ದಾಗೆ ಹುಷಾರ್ ತಪ್ಪಿದ್ದರಿಂದ ಕಾಕ್ಕನಾಡುನಲ್ಲಿನ ಸನ್ರೈಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಕೊಂಚ ಚೇತರಿಸಿಕೊಂಡಿದ್ದನು. ಆದರೇ ಹೊಟ್ಟೆಯಲ್ಲಿ ನೋವು ಕಾಣಿಸಿದ್ದರಿಂದ ಅಕ್ಟೋಬರ್ 22 ರಂದು ಆಸ್ಪತ್ರೆಗೆ ಮತ್ತೆ ದಾಖಲು ಆಗಿದ್ದನು ಎನ್ನಲಾಗಿದೆ.

ಯುವಕನ ಸ್ಥಿತಿ ಗಂಭೀರ ಆಗುತ್ತ ಹೋಗಿದ್ದರಿಂದ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ರಿಲೀಸ್ ಮಾಡಿರುವ ಹೆಲ್ತ್ ಬುಲೆಟಿನ್ ಅಲ್ಲಿ ಯುವಕನ ಕಿಡ್ನಿ ಹಾಗೂ ಲೀವರ್ ಹಾನಿಯಾಗಿದ್ದು, ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಆದರೇ ಅವರಿಗೆ ದೇಹದಲ್ಲಿ ವಿಷ ಸೇರಿರುವುದು ಗೊತ್ತಾಗಿದೆ. ಇದು ಚಿಕನ್ ಶವರ್ಮಾ ಪದಾರ್ಥದಿಂದ ಆಗಿದಿಯೋ ಅಥವಾ ಬೇರೆ ಆಹಾರದಿಂದ ಆಗಿದಿಯೋ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮೃತನ ಸಂಬಂಧಿಕರು ರೆಸ್ಟೋರೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಸರ್ಕಾರದ ಆದೇಶದಂತೆ ಅದನ್ನು ಮುಚ್ಚಲಾಗಿದೆ. ರೆಸ್ಟೋರೆಂಟ್ ಮಾಲೀಕರ ವಿರುದ್ಧ ತೃಕ್ಕಾಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top